Slide
Slide
Slide
previous arrow
next arrow

ಭಿಕ್ಷುಕಿಯ ಅಂತ್ಯಕ್ರಿಯೆ ನೆರವೇರಿಸಿದ ಸಮಾಜ ಸೇವಕ ಮಂಜು ಮುಟ್ಟಳ್ಳಿ

300x250 AD

ಭಟ್ಕಳ: ಅನಾರೋಗ್ಯದಿಂದ ಸಾವನ್ನಪ್ಪಿದ ಅನಾಥ ಭಿಕ್ಷುಕಿಯೋರ್ವಳ ಮೃತ ದೇಹವನ್ನು ಸಾಮಾಜ ಸೇವಕ ಮಂಜು ಮುಟ್ಟಳ್ಳಿ ಇಲ್ಲಿನ ಬಂದರ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

ಮೃತ ಭಿಕ್ಷುಕಿಯನ್ನು ಮಾದವೇಮ್ಮ ಶಂಕರನಾಗ ಜುಮ್ಮನವರ ಹಾವೇರಿ ಜಿಲ್ಲೆ ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಮುರುಡೇಶ್ವರ ಸುತ್ತಮುತ್ತಲಿನಲ್ಲಿ ಭಿಕ್ಷಾಟನೆ ಮಾಡಿಕೊಂಡು ಮುರ್ಡೇಶ್ವರ ನಾಕಾದ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದಳು. ಕಳೆದ 3-4 ತಿಂಗಳ ಹಿಂದೆ
ಅನಾರೋಗ್ಯದಿಂದ ಬಳಲುತ್ತಿದ್ದವಳ ಆರೋಗ್ಯದಲ್ಲಿ ವ್ಯತ್ಯಾಸಗೊಂಡ ಹಿನ್ನೆಲೆ ಕೂಗಾಡಲು ಪ್ರಾರಂಭಿಸಿದ್ದಾಳೆ. ಬಳಿಕ ಅಲ್ಲಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಬಳಿಕ ವಿಷಯ ತಿಳಿದ ಸಮಾಜ ಸೇವಕ ಮಂಜು ಮುಟ್ಟಳ್ಳಿ ಮೃತ ದೇಹವನ್ನು ಇಲ್ಲಿನ ಬಂದರ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕಳೆದ 7 ರಿಂದ 8 ತಿಂಗಳ ಹಿಂದಷ್ಟೇ ಈಕೆಯ ಮಗನ ಕೂಡ ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದು ಆತನ ಮೃತ ದೇಹವನ್ನು ಕೂಡ ಸಮಾಜ ಸೇವಕ ಮಂಜು ಮುಟ್ಟಳ್ಳಿ ಅಂತ್ಯಕ್ರಿಯೆ ನೆರವೇರಿಸಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

300x250 AD

ಇವರಿಗೆ ಪದ್ಮಯ ದೇವಾಡಿಗ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ಎವರೆಸ್ಟ್ ಲೋಬೋ ಸಾಥ್ ನೀಡಿದರು

Share This
300x250 AD
300x250 AD
300x250 AD
Back to top